• Talk To Astrologers
  • Talk To Astrologers
  • Brihat Horoscope
  • Personalized Horoscope 2024
  1. Lang :

ಮಕರ ಸಂಕ್ರಾಂತಿ 2024 ದಿನಾಂಕ ಮತ್ತು ಮುಹೂರ್ತ

2024 ನಲ್ಲಿ ಮಕರ ಸಂಕ್ರಾಂತಿ ಯಾವಾಗ?

15

ಜನವರಿ, 2024

(ಸೋಮವಾರ)

ಮಕರ ಸಂಕ್ರಾಂತಿ

Makar Sankranti Puja Muhurat For New Delhi, India

Punya Kaal Muhurat :
07:15:13 to 12:30:00
ಅವಧಿ :
5 ಗಂಟೆ 14 ನಿಮಿಷ
Mahapunya Kaal Muhurat :
07:15:13 to 09:15:13
ಅವಧಿ :
2 ಗಂಟೆ 0 ನಿಮಿಷ
Sankranti Moment :
02:31:04

ಬನ್ನಿ 2024 ನಲ್ಲಿ ಮಕರ ಸಂಕ್ರಾಂತಿ ಯಾವಾಗ ಇದೆ ಮತ್ತು ಮಕರ ಸಂಕ್ರಾಂತಿ 2024 ರ ದಿನಾಂಕ ಮತ್ತು ಮುಹೂರ್ತವನ್ನು ತಿಳಿಯೋಣ.

ಹಿಂದು ಧರ್ಮದಲ್ಲಿ ಮಕರ ಸಂಕ್ರಾಂತಿ ಒಂದು ಮುಖ್ಯವಾದ ಹಬ್ಬ. ಭಾರತದ ವಿಭಿನ್ನ ಕ್ಷೇತ್ರಗಳಲ್ಲಿ ಈ ಹಬ್ಬವನ್ನು ಸ್ಥಳೀಯ ನಂಬಿಕೆಗಳ ಪ್ರಕಾರ ಆಚರಿಸುತ್ತಾರೆ. ಪ್ರತಿ ವರ್ಷ ಮಕರ ಸಂಕ್ರಾಂತಿ ಸಾಮಾನ್ಯವಾಗಿ 14 ಜನವರಿ ರಂದು ಆಚರಿಸಲಾಗುತ್ತದೆ. ಈ ದಿನ, ಸೂರ್ಯನು ಉತ್ತರಾಯಣವನ್ನು ನಡೆಸಿದರೆ , ಉತ್ತರ ಗೋಳಾರ್ಧವು ಸೂರ್ಯನ ಕಡೆಗೆ ತಿರುಗುತ್ತದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಈ ದಿನ ಸೂರ್ಯನು ಮಕರ ರಾಶಿಚಕ್ರದಲ್ಲಿ ಪ್ರವೇಶಿಸುತ್ತಾನೆ. ಹೆಚ್ಚಾಗಿ ಹಿಂದೂ ಹಬ್ಬಗಳ ಲೆಕ್ಕಾಚಾರ ಚಂದ್ರನ ಮೇಲೆ ಆಧರಿಸಿದ ಪಂಚಾಂಗದ ಮೂಲಕ ಮಾಡಲಾಗುತ್ತದೆ. ಆದರೆ ಮಕರ ಸಂಕ್ರಾತಿ ಹಬ್ಬ ಸೂರ್ಯನ ಮೇಲೆ ಆಧರಿಸಿದ ಪಂಚಾಂಗದ ಲೆಕ್ಕಾಚಾರದಿಂದ ಆಚರಿಸಲಾಗುತ್ತದೆ. ಮಕರ ಸಂಕ್ರಾತಿಯಿಂದ ಋತುವಿನಲ್ಲಿ ಬದಲಾವಣೆ ಆಗುತ್ತದೆ. ಶರತ್ಕಾಲವು ಮಸುಕಾಗಲು ಪ್ರಾರಂಭಿಸುತ್ತದೆ ಮತ್ತು ವಸಂತಕಾಲದ ಆಗಮನ ಪ್ರಾರಂಭವಾಗುತ್ತದೆ. ಇದರ ಪರಿಣಾಮದಿಂದಾಗಿ, ದಿನಗಳು ಹೆಚ್ಚಾಗುತ್ತವೆ ಮತ್ತು ರಾತ್ರಿಗಳು ಕಡಿಮೆಯಾಗುತ್ತವೆ.

ಮಕರ ಸಂಕ್ರಾಂತಿಯ ಮಹತ್ವ

ಧಾರ್ಮಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನಗಳು

ಭಾರತದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಮಕರ ಸಂಕ್ರಾಂತಿಗೆ ದೊಡ್ಡ ಮಹತ್ವ ಇದೆ. ಪೌರಾಣಿಕ ನಂಬಿಕೆಗಳ ಪ್ರಕಾರ ಮಕರ ಸಂಕ್ರಾಂತಿಯ ದಿನದಂದು ಸೂರ್ಯ ದೇವ ತಮ್ಮ ಮಗನಾದ ಶನಿಯ ಮನೆಗೆ ಹೋಗುತ್ತಾರೆ. ಶನಿಯು ಮಕರ ಮತ್ತು ರಾಶಿಚಕ್ರದ ಅಧಿಪತಿ. ಆದ್ದರಿಂದ ಈ ಹಬ್ಬವು ತಂದೆ ಮತ್ತು ಮಗನ ವಿಚಿತ್ರ ಒಕ್ಕೂಟದೊಂದಿಗೂ ಸಂಬಂಧಿಸಿದೆ. ಒಂದು ಇತರ ಕಥೆಯ ಪ್ರಕಾರ, ರಾಕ್ಷಸರ ಮೇಲೆ ಭಗವಂತ ವಿಷ್ಣುವಿನ ವಿಜಯವಾಗಿಯೂ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಭಗವಂತ ವಿಷ್ಣು ಭೂಲೋಕದಲ್ಲಿ ಅಸುರರ ನಾಶ ಮಾಡಿ ಅವರ ತಲೆಯನ್ನು ಕತ್ತರಿಸಿ ಮಂದರ ಪರ್ವತದ ಮೇಲೆ ಸಮಾಧಿ ಮಾಡಿದರು. ಅಂದಿನಿಂದ ಭಗವಂತ ವಿಷ್ಣುವಿನ ಈ ವಿಜಯವನ್ನು ಮಕರ ಸಂಕ್ರಾಂತಿ ಹಬ್ಬವೆಂದು ಆಚರಿಸಲಾಯಿತು.

ಧಾನ್ಯಗಳ ಕೊಯ್ಲು ಹಬ್ಬ

ಹೊಸ ಬೆಳೆ ಮತ್ತು ಹೊಸ ಋತುವಿನ ಆಗಮನವಾಗಿ ಮಕರ ಸಂಕ್ರಾಂತಿಯನ್ನು ಆಡಂಬರದಿಂದ ಆಚರಿಸಲಾಗುತ್ತದೆ. ಪಂಜಾಬ್, ಯು ಪಿ, ಬಿಹಾರ್ ಮತ್ತು ತಮಿಳುನಾಡಿನಲ್ಲಿ, ಹೊಸ ಬೆಳೆಗಳನ್ನು ಕೊಯ್ಯುವ ಸಮಯ ಇದು, ಅದಕ್ಕಾಗಿಯೇ ರೈತರು ಮಕರ ಸಂಕ್ರಾಂತಿಯನ್ನು ಕೃತಜ್ಞತೆಯ ದಿನವಾಗಿ ಆಚರಿಸುತ್ತಾರೆ. ಹೊಲಗಳಲ್ಲಿ ಗೋಧಿ ಮತ್ತು ಭತ್ತದ ಬೆಳೆ ರೈತರ ಕಠಿಣ ಪರಿಶ್ರಮದ ಪರಿಣಾಮ, ಆದರೆ ಇದೆಲ್ಲವೂ ದೇವರ ಮತ್ತು ಪ್ರಕೃತಿಯ ಆಶೀರ್ವಾದದಿಂದ ಸಾಧ್ಯವಾಗುತ್ತದೆ. ಪಂಜಾಬ್ ಮತ್ತು ಜಮ್ಮು - ಕಾಶ್ಮೀರಿನಲ್ಲಿ ಮಕರ ಸಂಕ್ರಾಂತಿಯನ್ನು ‘ಲೊಹಡಿ’ ಎಂದು ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿಯನ್ನು ‘ಪೊಂಗಲ್’ ಎಂದು ಆಚರಿಸಲಾಗುತ್ತದೆ, ಆದರೆ ಉತ್ತರ ಪ್ರದೇಶ ಮತ್ತು ಬಿಹಾರಿನಲ್ಲಿ ಮಕರ ಸಂಕ್ರಾಂತಿಯನ್ನು ‘ಖಿಚಡಿ’ ಎಂದುಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯಂದು ಕೆಲವು ಸ್ಥಳಗಳಲ್ಲಿ ಖಿಚಡಿ ಎಂದು, ಕೆಲವು ಸ್ಥಳಗಲ್ಲಿ ಚೂಡಾ ಮತ್ತು ಕೆಲವು ಸ್ಥಳಗಳಲ್ಲಿ ಲಡ್ಡು ಎಂದು ಆಚರಿಸಲಾಗುತ್ತದೆ.

ತಾತ್ಕಾಲಿಕ ಮಹತ್ವ

ಸೂರ್ಯ ಪೂರ್ವದಿಂದ ದಕ್ಷಿಣದ ಕಡೆಗೆ ಚಲಿಸುವಾಗ, ಈ ಸಮಯದಲ್ಲಿ ಸೂರ್ಯನ ಕಿರಣಗಳನ್ನು ಕೆಟ್ಟದು ಎಂದು ಈ ರೀತಿಯಾಗಿ ಪರಿಗಣಿಸಲಾಗಿದೆ, ಆದರೆ ಸೂರ್ಯ ಪೂರ್ವದಿಂದಉತ್ತರದ ಕಡೆಗೆ ನಡೆಯುವಾಗ, ಆಗ ಸೂರ್ಯ ಕಿರಣಗಳು ಅರೋಗ್ಯ ಮತ್ತುಶಾಂತಿಯನ್ನು ಹೆಚ್ಚಿಸುತ್ತವೆ. ಈ ಕಾರಣದಿಂದಾಗಿ ಸಾಧು - ಸಂತರು ಮತ್ತು ಆಧ್ಯಾತ್ಮಿಕ ಕ್ರಿಯೆಗಳಲ್ಲಿ ತೊಡಗಿರುವವರು, ಶಾಂತಿ ಮತ್ತು ಸಾಧನೆಯನ್ನು ಪಡೆಯುತ್ತಾರೆ. ಅಂದರೆ ಸರಳ ಪದಗಳಲ್ಲಿ ಹೇಳಿದರೆ, ಮೊದಲಿನ ಕಹಿ ಅನುಭವಗಳನ್ನು ಮರೆತು ಮನುಷ್ಯ ಮುಂದುವರಿಯುತ್ತಾನೆ. ಭಗವಂತ ವಿಷ್ಣು ಸ್ವತಃ ಗೀತಾ ದಲ್ಲಿ ಹೇಳಿದ್ದಾರೆ, ಉತ್ತರಾಯಣದ ಆರು ತಿಂಗಳ ಶುಭ ಸಮಯದಲ್ಲಿ, ಸೂರ್ಯ ಉತ್ತರಾಯಣಕ್ಕೆ ಚಲಿಸಿದಾಗ, ಆ ಸಮಯದಲ್ಲಿ ಭೂಮಿಯೂ ಪ್ರಕಾಶಮಾನವಾಗುತ್ತದೆ, ಮತ್ತು ಈ ಸಮಯದಲ್ಲಿ ದೇಹವನ್ನು ತ್ಯಾಗ ಮಾಡಿದರೆ ಮನುಷ್ಯನ ಪುನರ್ಜನ್ಮ ಆಗುವುದಿಲ್ಲ ಮತ್ತು ಬ್ರಹ್ಮನನ್ನು ಪಡೆಯುತ್ತಾರೆ. ಮಹಾಭಾರತದ ಅವಧಿಯಲ್ಲಿ ಭೀಷ್ಮ ಪಿತಾಮಹ, ಇವರಿಗೆ ಸಾವಿನ ಹಾರೈಕೆಯ ವರವಿತ್ತು, ಅವರು ಕೂಡ ಮಕರ ಸಂಕ್ರಾಂತಿಯಂದು ತನ್ನ ದೇಹವನ್ನು ತ್ಯಾಗಿಸಿದರು.

ಮಕರ ಸಂಕ್ರಾಂತಿಯೊಂದಿಗೆ ಸೇರಿದ ಹಬ್ಬಗಳು

ಭಾರತದಲ್ಲಿ ಮಕರ ಸಂಕ್ರಾಂತಿಯ ಸಮಯದಲ್ಲಿ ಹೊಸ ಬೆಳೆಯ ಆಗಮನವಾಗುತ್ತದೆ. ಈ ಅವಕಾಶದಲ್ಲಿ ರೈತರು ಬೆಳೆಯ ಕೊಯ್ಲು ಮಾಡಿದ ನಂತರ ಈ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಭಾರತದ ಪ್ರತಿಯೊಂದು ರಾಜ್ಯದಲ್ಲಿ ಮಕರ ಸಂಕ್ರಾಂತಿಯನ್ನು ವಿಭಿನ್ನ ಹೆಸರುಗಳಿಂದ ಆಚರಿಸಲಾಗುತ್ತದೆ.

ಪೊಂಗಲ್

ಪೊಂಗಲ್ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳನಾಡು, ಕೇರಳ ಮತ್ತು ಆಂಧ್ರ ಪ್ರದೇಶದಲ್ಲಿ ಆಚರಿಸಲಾಗುವ ಒಂದು ಮುಖ್ಯವಾದ ಹಬ್ಬ. ಪೊಂಗಲ್ ವಿಶೇಷಕರವಾಗಿ ರೈತರ ಹಬ್ಬ. ಈ ಅವಕಾಶದಲ್ಲಿ ಭತ್ತದೆ ಬೆಳೆಯ ಕೊಯ್ಲು ಮಾಡಿದ ನಂತರ ತಮ್ಮ ಸಂತೋಷವನ್ನು ತೋರಿಸಲು ಪೊಂಗಲ್ ಹಬ್ಬವನ್ನು ಆಚರಿಸುತ್ತಾರೆ. ಪೊಂಗಲ್ ಹಬ್ಬ ‘ ತೈ ‘ ಎಂಬುವ ತಮಿಳ್ ತಿಂಗಳಿನ ಮೊದಲನೇ ದಿನಾಂಕ ಅಂದರೆ ಜನವರಿಯ ಮಧ್ಯದಲ್ಲಿ ಆಚರಿಸಲಾಗುತ್ತದೆ. ಮೂರು ದಿನಗಳ ವರೆಗೆ ನಡಯುವ ಈ ಹಬ್ಬ ಸೂರ್ಯ ಮತ್ತು ಇಂದ್ರ ದೇವನಿಗೆ ಸಮರ್ಪಿಸಲಾಗಿದೆ. ಪೊಂಗಲ್ ಹಬ್ಬದ ಮೂಲಕ ಒಳ್ಳೆ ಮಳೆ, ಫಲವತ್ತಾದ ಭೂಮಿ ಮತ್ತು ಉತ್ತಮ ಬೆಳೆಗಾಗಿ ಈಶ್ವರನ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಪೊಂಗಲ್ ಹಬ್ಬದ ಮೊದಲಿನ ದಿನದಲ್ಲಿ ಕಸವನ್ನು ಸುಡಲಾಗುತ್ತದೆ, ಎರಡನೇ ದಿನ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ ಮತ್ತು ಮೂರನೇ ದಿನ ಹಣ ಮತ್ತು ಪ್ರಾಣಿಗಳನ್ನು ಪೂಜಿಸಲಾಗುತ್ತದೆ.

ಉತ್ತರಾಯಣ

ಉತ್ತರಾಯಣವು ವಿಶೇಷವಾಗಿ ಗುಜರಾತ್‌ನಲ್ಲಿ ಆಚರಿಸುವ ಹಬ್ಬ. ಈ ಹಬ್ಬವನ್ನು ಜನವರಿ 14 ಮತ್ತು 15 ರಂದು ಹೊಸ ಬೆಳೆ ಮತ್ತು ಋತುವಿನ ಆಗಮನದಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಗುಜರಾತ್‌ನಲ್ಲಿ ಗಾಳಿಪಟಗಳನ್ನು ಹಾರಿಸಲಾಗುತ್ತದೆ ಮತ್ತು ಗಾಳಿಪಟ ಉತ್ಸವವನ್ನು ಆಯೋಜಿಸಲಾಗುತ್ತದೆ, ಇದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಉತ್ತರಾಯಣ ಹಬ್ಬದಂದು ಉಪವಾಸವನ್ನು ಇಡಲಾಗುತ್ತದೆ ಮತ್ತು ಎಳ್ಳು ಮತ್ತು ನೆಲಗಡಲೆ ಗಿರಣಿಯನ್ನು ತಯಾರಿಸಲಾಗುತ್ತದೆ.

ಲೊಹಡಿ

ಲೊಹಡಿ ವಿಶೇಷವಾಗಿ ಪಂಜಾಬ್ನಲ್ಲಿ ಆಚರಿಸಲ್ಪಡುವ ಹಬ್ಬವಾಗಿದೆ, ಇದನ್ನು ಬೆಳೆಗಳ ಕೊಯ್ಲು ಮಾಡಿದ ನಂತರ ಜನವರಿ 13 ರಂದು ಆಡಂಬರದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಹೋಲಿಕಾವನ್ನು ಸಂಜೆ ಸುಡಲಾಗುತ್ತದೆ ಮತ್ತು ಎಳ್ಳು, ಬೆಲ್ಲ ಮತ್ತು ಜೋಳವನ್ನು ಅಗ್ನಿಗೆ ಅರ್ಪಣೆಯಾಗಿ ನೀಡಲಾಗುತ್ತದೆ.

ಮಾಘ / ಭೋಗಲಿ ಬಿಹು

ಅಸ್ಸಾಂನಲ್ಲಿ ಮಾಘ ತಿಂಗಳಿನ ಸಂಕ್ರಾಂತಿಯ ಮೊದಲನೇ ದಿನದಿಂದ ಮಾಘ ಬಿಹು ಹಬ್ಬವನ್ನು ಆಚರಿಸಲಾಗುತ್ತದೆ. ಭೋಗಾಲಿ ಬಿಹು ಸಂದರ್ಭದಲ್ಲಿ, ಆಹಾರ ಮತ್ತು ಪಾನೀಯವನ್ನು ಆಡಂಬರದಿಂದ ಮಾಡಲಾಗುತ್ತದೆ. ಈ ಸಮಯದಲ್ಲಿ ಅಸ್ಸಾಂನಲ್ಲಿ ಎಳ್ಳು, ಅಕ್ಕಿ, ತೆಂಗಿನಕಾಯಿ ಮತ್ತು ಕೊಬ್ಬಿನ ಬೆಲೆ ಚನ್ನಾಗಿ ಆಗುತ್ತದೆ. ಇದರಿಂದಲೇ ವೈವಿಧ್ಯಮಯ ಭಕ್ಷ್ಯಗಳು ತಯಾರಿಸಿ ತಿನ್ನಲಾಗುತ್ತದೆ ಮತ್ತು ತಿನ್ನಿಸಲಾಗುತ್ತದೆ. ಭೋಗಾಲಿ ಬಿಹು ಅಂದು ಹೋಲಿಕಾ ಸುಡಲಾಗುತ್ತದೆ ಮತ್ತು ಎಳ್ಳು ತೆಂಗಿನ ಕಾಯಿಯಿಂದ ತಯಾರಿಸಿದ ಭಕ್ಷ್ಯಗಳನ್ನು ಅಗ್ನಿ ದೇವರಿಗೆ ಅರ್ಪಿಸಲಾಗುತ್ತದೆ. ಭೋಗಲಿ ಬಿಹು ಸಂದರ್ಭದಲ್ಲಿ, ತೆಕೆಲಿ ಭೋಂಗಾ ಎಂಬ ಆಟವನ್ನು ಆಡಲಾಗುತ್ತದೆ ಮತ್ತು ಎಮ್ಮೆ ಹೋರಾಟವೂ ನಡೆಯುತ್ತದೆ.

ಬೈಸಾಖಿ

ಬೈಸಾಖಿ ಪಂಜಾಬ್‌ನಲ್ಲಿ ಸಿಖ್ ಸಮುದಾಯ ಆಚರಿಸುವ ಪ್ರಮುಖ ಹಬ್ಬವಾಗಿದೆ. ಬೈಸಾಖಿಯ ಸಂದರ್ಭದಲ್ಲಿ, ಪಂಜಾಬ್‌ನಲ್ಲಿ ಗೋಧಿ ಬೆಳೆ ಕೊಯ್ಲು ಮಾಡಲು ಪ್ರಾರಂಭವಾಗುತ್ತದೆ ಮತ್ತು ರೈತರ ಮನೆ ಸಂತೋಷದಿಂದ ತುಂಬಿರುತ್ತದೆ. ಪಂಜಾಬ್‌ನ ರೈತರು ಗೋಧಿಯನ್ನು ಕನಕ್ ಅಂದರೆ ಚಿನ್ನ ಎಂದು ಪರಿಗಣಿಸುತ್ತಾರೆ. ಬೈಸಾಖಿಯ ಸಂದರ್ಭದಲ್ಲಿ ಪಂಜಾಬ್‌ನಲ್ಲಿ ಜಾತ್ರೆಗಳು ನಡೆಯುತ್ತವೆ ಮತ್ತು ಜನರು ಹಾಡುವ ಮತ್ತು ನೃತ್ಯ ಮಾಡುವ ಮೂಲಕ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ನದಿಗಳು ಮತ್ತು ಕೊಳಗಳಲ್ಲಿ ಸ್ನಾನ ಮಾಡಿದ ನಂತರ ಜನರು ದೇವಾಲಯಗಳು ಮತ್ತು ಗುರುದ್ವಾರಗಳಲ್ಲಿ ದೇವರ ದರ್ಶನೆ ಮಾಡಲು ಹೋಗುತ್ತಾರೆ.

ಮಕರ ಸಂಕ್ರಾಂತಿಯ ಸಂಪ್ರದಾಯಗಳು

ಹಿಂದೂ ಧರ್ಮದಲ್ಲಿ, ಪ್ರತಿ ಹಬ್ಬವು ಸಿಹಿ ಭಕ್ಷ್ಯಗಳಿಲ್ಲದೆ ಅಪೂರ್ಣವಾಗಿದೆ. ಮಕರ ಸಂಕ್ರಾಂತಿಯಂದು ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಲಡ್ಡು ಮತ್ತು ಇತರ ಸಿಹಿ ತಿಂಡಿಗಳನ್ನು ತಯಾರಿಸುವ ಸಂಪ್ರದಾಯವಿದೆ. ಎಳ್ಳು ಮತ್ತು ಬೆಲ್ಲದ ಸೇವನೆಯು ಶೀತ ವಾತಾವರಣದಲ್ಲಿ ದೇಹಕ್ಕೆ ಉಷ್ಣತೆಯನ್ನು ನೀಡುತ್ತದೆ ಮತ್ತು ಇದು ಆರೋಗ್ಯಕ್ಕೆ ಪ್ರಯೋಜನಕಾರಿ. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಸಿಹಿ ತಿಂಡಿಗಳನ್ನು ತಿನ್ನುವುದು ಮತ್ತು ತಿನಿಸುವುದರಿಂದ, ಸಂಬಂಧಗಳಲ್ಲಿ ಇರುವ ಕಿಹಿಯನ್ನು ದೂರ ಮಾಡಲಾಗುತ್ತದೆ ಎಂದು ನಂಬಲಾಗಿದೆ. ಮತ್ತು ನಾವು ಪ್ರತಿಯೊಬ್ಬರೂ ಜೀವನದಲ್ಲಿ ಸಕಾರಾತ್ಮಕ ಶಕ್ತಿಯೊಂದಿಗೆ ಮುಂದುವರಿಯುತ್ತೇವೆ. ಸಿಹಿ ತಿನ್ನುವುದರಿಂದ ವಾಣಿ ಮತ್ತು ನಡವಳಿಕೆಯಲ್ಲಿ ಮಾಧುರ್ಯವನ್ನು ತರುತ್ತದೆ ಮತ್ತು ಜೀವನದಲ್ಲಿ ಸಂತೋಷವನ್ನು ತರುತ್ತದೆ ಎಂದು ಸಹ ಹೇಳಲಾಗುತ್ತದೆ. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ, ಸೂರ್ಯ ದೇವರ ಮಗನಾದ ಶನಿಯ ಮನೆಗೆ ತಲುಪಿದಾಗ ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಸಿಹಿತಿಂಡಿಗಳನ್ನು ವಿತರಿಸಲಾಗುತ್ತದೆ.

ಎಳ್ಳು ಮತ್ತು ಬೆಲ್ಲದ ಸಿಹಿತಿಂಡಿಗಳಲ್ಲದೆ, ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗಾಳಿಪಟಗಳನ್ನು ಹಾರಿಸುವ ಸಂಪ್ರದಾಯವಿದೆ. ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಗಾಳಿಪಟ ಹಬ್ಬವನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ, ಮಕ್ಕಳಲ್ಲದೆ ಹಿರಿಯರು ಸಹ ಗಾಳಿಪಟವನ್ನು ಹಾರಿಸುತ್ತಾರೆ. ಗಾಳಿಪಟ ಹಾರಾಟದ ಸಮಯದಲ್ಲಿ, ಇಡೀ ಆಕಾಶವು ವರ್ಣರಂಜಿತ ಗಾಳಿಪಟಗಳಿಂದ ಝೇಂಕರಿಸುತ್ತದೆ.

ತೀರ್ಥಯಾತ್ರೆ ಮತ್ತು ಜಾತ್ರೆ

ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ದೇಶದ ಅನೇಕ ನಗರಗಳಲ್ಲಿ ಜಾತ್ರೆಗಳು ನಡೆಯುತ್ತವೆ. ವಿಶೇಷವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದಕ್ಷಿಣ ಭಾರತದಲ್ಲಿ ದೊಡ್ಡ ಜಾತ್ರೆಗಳನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಗಂಗಾ ಮತ್ತು ಇತರ ಪವಿತ್ರ ನದಿಗಳ ತೀರದಲ್ಲಿ ಸ್ನಾನ ಮಾಡಿ ದಾನ ಮಾಡುತ್ತಾರೆ ಮತ್ತು ಧರ್ಮ ಮಾಡುತ್ತಾರೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಶ್ರೀಕೃಷ್ಣನು ಸ್ವತಃ ಹೇಳಿದ್ದು, ಮಕರ ಸಂಕ್ರಾಂತಿಯಂದು ದೇಹವನ್ನು ತ್ಯಜಿಸುವವನು ಮೋಕ್ಷವನ್ನು ಪಡೆಯುತ್ತಾನೆ ಮತ್ತು ಜೀವನ ಮತ್ತು ಸಾವಿನ ಚಕ್ರದಿಂದ ಮುಕ್ತನಾಗಿರುತ್ತಾನೆ.

AstroSage on Mobile ALL MOBILE APPS

AstroSage TV SUBSCRIBE

      Buy Gemstones

      Best quality gemstones with assurance of AstroSage.com

      Buy Yantras

      Take advantage of Yantra with assurance of AstroSage.com

      Buy Navagrah Yantras

      Yantra to pacify planets and have a happy life .. get from AstroSage.com

      Buy Rudraksh

      Best quality Rudraksh with assurance of AstroSage.com